ಗಿರಿಗಳೆದ್ದಿವೆ ತೀರಗಳಿಂದ
ಅಲೆಅಲೆಯಾಗಿ ನಾಡಿನೊಳಗೆ
ಕಾದಿವೆ ಕಾರ್ಮೋಡಗಳ ದಾರಿಗೆ
ಬಾಗಿಲ ತೆರೆಯೆ, ಸುರಿಸಲು ಪನ್ನೀರ
ಎದೆ ಚೀರುವ ನೀರವತೆಯಲಿ
ಬೆರೆಯುತಿದೆ ಜಂತುಗಳ ಗುಂಯ್ ನಾದ;
ಮಬ್ಬೇರುತಿದೆ, ಒತ್ತೊತ್ತಿನ ವನವಿದು
ಹಗಲೋ? ಇರುಳೋ?
ಬಾನೆಲೆಗಳ ಚಪ್ಪರದ
ಮೇಲೆರಗಿದನೋ ವರುಣ
ಟಪಟಪನೆ ಪಟಪಟನೆ
ತೊಟ್ಟಿಕ್ಕುವ ಹನಿಗಳ ಹಳ್ಳ
ಚಿಲುಮೆಗಳ ಬಳ್ಳ
ಒಂದಾಗಲು ಮೈದುಂಬಿದಳೋ ನೀರೆ
ಹರಿವಳು ತಳುಕಿ ಬಳುಕಿ ಧುಮುಕಿ
ದಿಗಂತದಿಂದ ದಿಗಂತಕೆ
ತೇಲುತಿದೆ ಹಕ್ಕಿ
ಅಪ್ಪುಗೆಯ ರೆಕ್ಕೆಯ ಬಿಚ್ಚಿ
ನೋಟಗಳ ನುಂಗುತ
ಅಂತರಂಗಕೆ; ಹಾಡುತ
‘ಚೆಲುವೆಲ್ಲಾ ನನ್ನದೇ’
ಮಲೆನಾಡೊ ವೈನಾಡೊ
ಸೌಂದರ್ಯಕೆ ಯಾವ ರೂಪ?
ಯಾವ ಹೆಸರು?
-ಚೇತನ್
೧೬-೦೬-೨೦೦೫
Jun 16, 2005
May 25, 2005
ಬಿಡುಗಡೆ
ಕಡಲ ಬಿರುಗಾಳಿಗೆ
ಹುಯ್ದಾಡುತಿದೆ ಶ್ವೇತ ನೌಕೆ
- ತೀರವ ತೋರಬಾರದೇ?
ಕುರುಡಾಗಿವೆ ಕಣ್ಣುಗಳು
ಯಕ್ಷ ಪ್ರಶ್ನೆಗಳ ಕೋಲ್ಮಿಂಚಿಗೆ
- ಹೊಸ ದೃಷ್ಠಿಯ ಕರುಣಿಸಬಾರದೇ?
ಕುದಿಯುತಿದೆ ಎದೆ
ಕಲ್ಮಶಗಳ ಕಿಚ್ಚಿನಲಿ
- ಮಳೆಗರೆಯಬಾರದೇ?
ಅದರಲಿ ಅಹಮ್ಮಿನ ಮಹಲು ಕುಸಿದು
ಸ್ವಾರ್ಥ ಅಸೂಯೆಗಳು
- ಕರಗಬಾರದೇ?
ಮರುಳಾಗಿಹೆ ನಾ
ಸುಪ್ತ ಬಂಧನಗಳೊಳಗೆ
-ಬಿಡುಗಡೆಯ ತೋರಬಾರದೇ?
ಮನಸು ಮಣ್ಣಾಗಿ
ಹೊಸ ಹಸಿರು ಅರಳಬಾರದೇ?
-ಚೇತನ
೨೫-೦೫-೨೦೦೫
ಹುಯ್ದಾಡುತಿದೆ ಶ್ವೇತ ನೌಕೆ
- ತೀರವ ತೋರಬಾರದೇ?
ಕುರುಡಾಗಿವೆ ಕಣ್ಣುಗಳು
ಯಕ್ಷ ಪ್ರಶ್ನೆಗಳ ಕೋಲ್ಮಿಂಚಿಗೆ
- ಹೊಸ ದೃಷ್ಠಿಯ ಕರುಣಿಸಬಾರದೇ?
ಕುದಿಯುತಿದೆ ಎದೆ
ಕಲ್ಮಶಗಳ ಕಿಚ್ಚಿನಲಿ
- ಮಳೆಗರೆಯಬಾರದೇ?
ಅದರಲಿ ಅಹಮ್ಮಿನ ಮಹಲು ಕುಸಿದು
ಸ್ವಾರ್ಥ ಅಸೂಯೆಗಳು
- ಕರಗಬಾರದೇ?
ಮರುಳಾಗಿಹೆ ನಾ
ಸುಪ್ತ ಬಂಧನಗಳೊಳಗೆ
-ಬಿಡುಗಡೆಯ ತೋರಬಾರದೇ?
ಮನಸು ಮಣ್ಣಾಗಿ
ಹೊಸ ಹಸಿರು ಅರಳಬಾರದೇ?
-ಚೇತನ
೨೫-೦೫-೨೦೦೫
May 9, 2005
ಪರೀಕ್ಷೆ
ನಾಳೆಯೇ ಪರೀಕ್ಷೆ
ಹಿರಿಯರ ಹಿರಿಯ ಆಕಾಂಕ್ಷೆ
ಯಾರ ತಪ್ಪಿಗೆ ಯಾರ ಶಿಕ್ಷೆ?
ಅಮ್ಮನ ಪಾಠದ ಕಾಟ
ಅಪ್ಪನ ಗದರುವ ನೋಟ
ತಲೆಯಲಿ ನೂರು ನೆವಗಳ ಕೂಟ
ಮೆತ್ತಗೆ ನೀರ ಹೀರುತ್ತಾ,
ಆಗಾಗ ಕಿರುಬೆರಳು ತೋರುತ್ತಾ,
ಬಾಗಿಲಲ್ಲಿ ಯಾರನ್ನೋ ಕಾಯುತ್ತಾ,
ಬಿಡುಗಡೆಯ ಪ್ರಯತ್ನವು ನಡೆದಿದೆ ಸತತ
ನೆನಪು ಬಾರದಿರಲು,
ಬೆನ್ನಲಿ ಬೆರಳು ಮೂಡಿರಲು,
ಕಣ್ಣಲಿ ಕಪ್ಪಕ್ಷರ ಕದಡಿದೆ
ಎವೆ ಬಡಿಯಲು ಹಾಯೆಂದು ಇಳಿದಿದೆ
ಪ್ರಾಣಿ ಪಕ್ಷಿ ಮಗ್ಗಿ
ಅಕ್ಷರ ಕಾಗುಣಿತಗಳೆಲ್ಲ
ನಿದ್ದೆಯಲಿ ಬೆರೆತು
ಕನಸಿನಲಿ ಕಾಡಿವೆ
ನಿಶ್ಯಬ್ಧದಲಿ ನೆನಪೆಂತೊ
ಹಾಳೆಯಲಿ ಇಳಿದಿದೆ
ಕಡೆಯ ಘಂಟೆ ಮೊಳಗಿದೆ
ಮರುಕಳಿಸುವ ನಲಿವಿಗೆ
ಬಯಲಿಂದು ಕಾದಿದೆ
-ಚೇತನ್ ಪಿ
೦೯-೦೫-೨೦೦೫
ಹಿರಿಯರ ಹಿರಿಯ ಆಕಾಂಕ್ಷೆ
ಯಾರ ತಪ್ಪಿಗೆ ಯಾರ ಶಿಕ್ಷೆ?
ಅಮ್ಮನ ಪಾಠದ ಕಾಟ
ಅಪ್ಪನ ಗದರುವ ನೋಟ
ತಲೆಯಲಿ ನೂರು ನೆವಗಳ ಕೂಟ
ಮೆತ್ತಗೆ ನೀರ ಹೀರುತ್ತಾ,
ಆಗಾಗ ಕಿರುಬೆರಳು ತೋರುತ್ತಾ,
ಬಾಗಿಲಲ್ಲಿ ಯಾರನ್ನೋ ಕಾಯುತ್ತಾ,
ಬಿಡುಗಡೆಯ ಪ್ರಯತ್ನವು ನಡೆದಿದೆ ಸತತ
ನೆನಪು ಬಾರದಿರಲು,
ಬೆನ್ನಲಿ ಬೆರಳು ಮೂಡಿರಲು,
ಕಣ್ಣಲಿ ಕಪ್ಪಕ್ಷರ ಕದಡಿದೆ
ಎವೆ ಬಡಿಯಲು ಹಾಯೆಂದು ಇಳಿದಿದೆ
ಪ್ರಾಣಿ ಪಕ್ಷಿ ಮಗ್ಗಿ
ಅಕ್ಷರ ಕಾಗುಣಿತಗಳೆಲ್ಲ
ನಿದ್ದೆಯಲಿ ಬೆರೆತು
ಕನಸಿನಲಿ ಕಾಡಿವೆ
ನಿಶ್ಯಬ್ಧದಲಿ ನೆನಪೆಂತೊ
ಹಾಳೆಯಲಿ ಇಳಿದಿದೆ
ಕಡೆಯ ಘಂಟೆ ಮೊಳಗಿದೆ
ಮರುಕಳಿಸುವ ನಲಿವಿಗೆ
ಬಯಲಿಂದು ಕಾದಿದೆ
-ಚೇತನ್ ಪಿ
೦೯-೦೫-೨೦೦೫
Apr 25, 2005
ನೆಮ್ಮದಿ
ಧುಮುಕುವ ಹನಿ
ಧರೆಗೆ ಮುತ್ತಿಡಲು
ಹೊಮ್ಮುವ ತೃಪ್ತಿಯ ತರಂಗಗಳು
ಕಳವಳದ ಮನಸಿಗೆಷ್ಟೋ ನೆಮ್ಮದಿ
ಹೊನ್ನಿನ ಎಳೆಬಿಸಿಲಿಗೆ
ಮುಖವೊಡ್ಡಲು, ರೆಪ್ಪೆಯೊಳಗೆ
ಮೂಡುವ ಬೆಚ್ಚನೆ ಬೆಳಕಿನ ಹಿತ
ಒತ್ತಡದಲಿ ಒತ್ತಿದ ಮನಸಿಗೆಷ್ಟೋ ನೆಮ್ಮದಿ
ನಿರ್ಜನ ರಸ್ತೆಯಲಿ, ನಿಶ್ಯಬ್ಧದಲಿ
ಒಂದೇ ಗತಿಯ
ಹುಚ್ಚು ನಡಿಗೆಯ ಲಯ
ದಣಿದ ಮನಸಿಗೆಷ್ಟೋ ನೆಮ್ಮದಿ
ಹೋದ ರಜೆಯಲಿ
ಊರ ಮನೆಯಲಿ
ತಾಯ್ ತೊಡೆಯಲಿ ತಲೆಯನಿಟ್ಟ ನೆನಪು
ದಿಕ್ಕೆಟ್ಟ ಮನಸಿಗೆಷ್ಟೊ ನೆಮ್ಮದಿ
ಕಣ್ತುಂಬಿ ಎದೆಯುಕ್ಕುವ
ಆ ಘಳಿಗೆ, ಆ ನಿಮಿಷದಲಿ
ಸಾಲು ನಿಲ್ಲುವ ಭಾವ ಪದಗಳು
ತಲ್ಲಣಿಸಿದ ಮನಸಿಗೆಷ್ಟೋ ನೆಮ್ಮದಿ
-ಚೇತನ್ ಪಿ
೨೫-೦೪-೨೦೦೫
ಧರೆಗೆ ಮುತ್ತಿಡಲು
ಹೊಮ್ಮುವ ತೃಪ್ತಿಯ ತರಂಗಗಳು
ಕಳವಳದ ಮನಸಿಗೆಷ್ಟೋ ನೆಮ್ಮದಿ
ಹೊನ್ನಿನ ಎಳೆಬಿಸಿಲಿಗೆ
ಮುಖವೊಡ್ಡಲು, ರೆಪ್ಪೆಯೊಳಗೆ
ಮೂಡುವ ಬೆಚ್ಚನೆ ಬೆಳಕಿನ ಹಿತ
ಒತ್ತಡದಲಿ ಒತ್ತಿದ ಮನಸಿಗೆಷ್ಟೋ ನೆಮ್ಮದಿ
ನಿರ್ಜನ ರಸ್ತೆಯಲಿ, ನಿಶ್ಯಬ್ಧದಲಿ
ಒಂದೇ ಗತಿಯ
ಹುಚ್ಚು ನಡಿಗೆಯ ಲಯ
ದಣಿದ ಮನಸಿಗೆಷ್ಟೋ ನೆಮ್ಮದಿ
ಹೋದ ರಜೆಯಲಿ
ಊರ ಮನೆಯಲಿ
ತಾಯ್ ತೊಡೆಯಲಿ ತಲೆಯನಿಟ್ಟ ನೆನಪು
ದಿಕ್ಕೆಟ್ಟ ಮನಸಿಗೆಷ್ಟೊ ನೆಮ್ಮದಿ
ಕಣ್ತುಂಬಿ ಎದೆಯುಕ್ಕುವ
ಆ ಘಳಿಗೆ, ಆ ನಿಮಿಷದಲಿ
ಸಾಲು ನಿಲ್ಲುವ ಭಾವ ಪದಗಳು
ತಲ್ಲಣಿಸಿದ ಮನಸಿಗೆಷ್ಟೋ ನೆಮ್ಮದಿ
-ಚೇತನ್ ಪಿ
೨೫-೦೪-೨೦೦೫
Apr 20, 2005
ನಮ್ಮ ಮಹಾನಗರಿ
ಉರಿಬಿಸಿಲಿನೊಳು ಅಲ್ಲೆಲ್ಲೋ ಕಾಣುವ
ಒಂದ್ನಾಲ್ಕು ಮರಗಳು
ಆ ಮರಗಳ ತೂತು ಛತ್ರಿಯ ಒಳಗೆ ತೂರುವ
ಒಂದ್ನಾಲ್ಕು ಕಿರಣಗಳು
ದುರ್ನಾತದ ಚರಂಡಿಯ ಪಕ್ಕದ
ಬಿಡಿಏ ಉದ್ಯಾನ
ಆ ಉದ್ಯಾನದೊಳು ಚಿಮ್ಮುವ ಕಾರಂಜಿಯ
ತಂಪನೆ ನೀರಿನ ಸಿಂಚನ
ವಾಹನಗಳ ಕರ್ಕಶ ಸದ್ದು,
ಕಪ್ಪು ಹೊಗೆಯ ನಟ್ಟ ನಡು
ಎಲ್ಲಿಂದಲೋ ತೇಲಿ ಬರುತಲಿಹುದು
ಆಕಾಶವಾಣಿಯ ಸುಮಧುರ ಹಾಡು
ಕೈ ಚಾಚಿದರೊಬ್ಬ ಸಿಗುವನು
ಅಷ್ಟೊಂದು ಇಕ್ಕಟ್ಟು
ಈ ಇಕ್ಕಟ್ಟಿನಲಿ ಗಟ್ಟಿಯಾಗಿದೆ
ಅವಿಭಕ್ತ ಕುಟುಂಬದ ಒಗ್ಗಟ್ಟು
ಮಹಾನಗರಿಯಲ್ಲಿಂದೂ ಅಳಿದಿಲ್ಲ
ಜಾತಿ ಮತಗಳ ಬೇಧ
ಈ ಬೇಧವ ಭೇಧಿಸುತಲಿದೆ
ಮನುಜತೆಯ ಸಹಜ ಸ್ನೇಹ ಸಂಬಂಧ
ಹತ್ತು ಭಾಷೆಯ ನೂರು ಸೀಮೆಗಳ
ಜನ ಮನಗಳದಿದು ಸಂಗಮ
ಆ ಸಂಗಮದೊಳೂ ಕಂಗೊಳಿಸುತಿದೆ
ಕನ್ನಡದ ನಿತ್ಯೋತ್ಸವದ ಸಂಭ್ರಮ
ಚೇತನ್ ಪಿ
೨೦-೦೪-೨೦೦೫
ಒಂದ್ನಾಲ್ಕು ಮರಗಳು
ಆ ಮರಗಳ ತೂತು ಛತ್ರಿಯ ಒಳಗೆ ತೂರುವ
ಒಂದ್ನಾಲ್ಕು ಕಿರಣಗಳು
ದುರ್ನಾತದ ಚರಂಡಿಯ ಪಕ್ಕದ
ಬಿಡಿಏ ಉದ್ಯಾನ
ಆ ಉದ್ಯಾನದೊಳು ಚಿಮ್ಮುವ ಕಾರಂಜಿಯ
ತಂಪನೆ ನೀರಿನ ಸಿಂಚನ
ವಾಹನಗಳ ಕರ್ಕಶ ಸದ್ದು,
ಕಪ್ಪು ಹೊಗೆಯ ನಟ್ಟ ನಡು
ಎಲ್ಲಿಂದಲೋ ತೇಲಿ ಬರುತಲಿಹುದು
ಆಕಾಶವಾಣಿಯ ಸುಮಧುರ ಹಾಡು
ಕೈ ಚಾಚಿದರೊಬ್ಬ ಸಿಗುವನು
ಅಷ್ಟೊಂದು ಇಕ್ಕಟ್ಟು
ಈ ಇಕ್ಕಟ್ಟಿನಲಿ ಗಟ್ಟಿಯಾಗಿದೆ
ಅವಿಭಕ್ತ ಕುಟುಂಬದ ಒಗ್ಗಟ್ಟು
ಮಹಾನಗರಿಯಲ್ಲಿಂದೂ ಅಳಿದಿಲ್ಲ
ಜಾತಿ ಮತಗಳ ಬೇಧ
ಈ ಬೇಧವ ಭೇಧಿಸುತಲಿದೆ
ಮನುಜತೆಯ ಸಹಜ ಸ್ನೇಹ ಸಂಬಂಧ
ಹತ್ತು ಭಾಷೆಯ ನೂರು ಸೀಮೆಗಳ
ಜನ ಮನಗಳದಿದು ಸಂಗಮ
ಆ ಸಂಗಮದೊಳೂ ಕಂಗೊಳಿಸುತಿದೆ
ಕನ್ನಡದ ನಿತ್ಯೋತ್ಸವದ ಸಂಭ್ರಮ
ಚೇತನ್ ಪಿ
೨೦-೦೪-೨೦೦೫
Apr 12, 2005
ಜೀವಜಲವೇ
ನನ್ನೊಡಲ ಜೀವಜಲವೇ,
ನಿನ್ನೊಡಲ ಈ ಜೀವವ ಸಲಹು ಬಾ
ಬಾ ತಾಯಿ, ಬಂದೇ ಬಾ,
ಈ ನಿನ್ನ ನನ್ನ ಮೈದುಂಬಿ ಬಾ…ನಿನ್ನೆಲ್ಲಾ ಆಕಾರಗಳಲಿ
ನಿನ್ನೆಲ್ಲಾ ವರ್ಣಗಳಲಿ
ನಿನ್ನೆಲ್ಲಾ ಗುಣಗಳಲಿ
ನಿನ್ನೆಲ್ಲಾ ರೂಪುಗಳಲಿ
ನಿನ್ನೆಲ್ಲಾ ಶಕ್ತಿಗಳಲಿ
ನಿನ್ನೆಲ್ಲಾ ವ್ಯಾಪ್ತಿಗಳಲಿ
ನಿನ್ನ ಒಡಲಾಳ ಜೀವಕೋಟಿಗಳಲಿ
ಶೂನ್ಯದ ತಳ ಸೇರುವೆ
ಭಕ್ತಿಯಿಂದ ಕೈ ಮುಗಿವೆ
ಬಾ ತಾಯಿ, ನೀ ಬಂದೇ ಬಾ…
ನಿನ್ನ ಗುಡುಗು ಗದ್ದಲಕೆ
ನಿನ್ನ ಸಿಡಿಲು ಮಿಂಚಿಗೆ
ನಿನ್ನ ರೋಷ ರಭಸಕೆ
ಉಸಿರ ಬಿಗಿ ಹಿಡಿದು ಕಾದಿಹೆ ನಾ
ಬಾ ತಾಯಿ, ನೀ ಬೇಗ ಬಾ…
ಇಳೆಯೊಳು ಉಕ್ಕಿ ಬಾ
ಕಡಲೋಳು ಕೊಚ್ಚಿ ಬಾ
ಗಗನವ ಮುಚ್ಚಿ ಬಾ
ಎಂತಾದರೂ ಬಾ
ಬಿರಿದ ಬಾಯ್ಗಳ ಮುಚ್ಚು ಬಾ
ಬಾ ತಾಯಿ, ನೀ ಬಂದೇ ಬಾ…
ಹಸಿರು ಎಲೆಗಳಲಿ
ಅವುಗಳ ನೆರಳಿನಲಿ
ನೆಲದ ತಂಪಿನಲಿ
ಮಣ್ಣಿನ ಕಂಪಿನಲಿ
ಕಾಮನ ಬಿಲ್ಲಿನಲಿ
ಅದರ ಬಿಂಬಗಳಲಿ
ನಮ್ಮೆಲ್ಲಾ ಜೀವನಾಳಗಳಲಿ
ಮೈ ಬೆವರ ಬಿಂದುಗಳಲಿ
ನದಿ ಕೆರೆ ತೊರೆಗಳಲಿ
ಹಳ್ಳ ಕೊಳ್ಳಗಳಲಿ
ಝರಿ ಜಲಪಾತಗಳಲಿ
ನಮ್ಮೆಲ್ಲಾ ಆನಂದ ಭಾಷ್ಪಗಳಲಿ
ನೆಲೆಸು ಬಾ
ಉಳಿಸು ಬಾ
ಬಾಳಿಸು ಬಾ…
ಬಾ ತಾಯಿ, ನೀ ಬಂದೇ ಬಾ,
ನಿನಿಲ್ಲೇ ನೆಲೆಸು ಬಾ
-ಚೇತನ್ ಪಿ
೧೨-೦೪-೨೦೦೫
ನಿನ್ನೊಡಲ ಈ ಜೀವವ ಸಲಹು ಬಾ
ಬಾ ತಾಯಿ, ಬಂದೇ ಬಾ,
ಈ ನಿನ್ನ ನನ್ನ ಮೈದುಂಬಿ ಬಾ…ನಿನ್ನೆಲ್ಲಾ ಆಕಾರಗಳಲಿ
ನಿನ್ನೆಲ್ಲಾ ವರ್ಣಗಳಲಿ
ನಿನ್ನೆಲ್ಲಾ ಗುಣಗಳಲಿ
ನಿನ್ನೆಲ್ಲಾ ರೂಪುಗಳಲಿ
ನಿನ್ನೆಲ್ಲಾ ಶಕ್ತಿಗಳಲಿ
ನಿನ್ನೆಲ್ಲಾ ವ್ಯಾಪ್ತಿಗಳಲಿ
ನಿನ್ನ ಒಡಲಾಳ ಜೀವಕೋಟಿಗಳಲಿ
ಶೂನ್ಯದ ತಳ ಸೇರುವೆ
ಭಕ್ತಿಯಿಂದ ಕೈ ಮುಗಿವೆ
ಬಾ ತಾಯಿ, ನೀ ಬಂದೇ ಬಾ…
ನಿನ್ನ ಗುಡುಗು ಗದ್ದಲಕೆ
ನಿನ್ನ ಸಿಡಿಲು ಮಿಂಚಿಗೆ
ನಿನ್ನ ರೋಷ ರಭಸಕೆ
ಉಸಿರ ಬಿಗಿ ಹಿಡಿದು ಕಾದಿಹೆ ನಾ
ಬಾ ತಾಯಿ, ನೀ ಬೇಗ ಬಾ…
ಇಳೆಯೊಳು ಉಕ್ಕಿ ಬಾ
ಕಡಲೋಳು ಕೊಚ್ಚಿ ಬಾ
ಗಗನವ ಮುಚ್ಚಿ ಬಾ
ಎಂತಾದರೂ ಬಾ
ಬಿರಿದ ಬಾಯ್ಗಳ ಮುಚ್ಚು ಬಾ
ಬಾ ತಾಯಿ, ನೀ ಬಂದೇ ಬಾ…
ಹಸಿರು ಎಲೆಗಳಲಿ
ಅವುಗಳ ನೆರಳಿನಲಿ
ನೆಲದ ತಂಪಿನಲಿ
ಮಣ್ಣಿನ ಕಂಪಿನಲಿ
ಕಾಮನ ಬಿಲ್ಲಿನಲಿ
ಅದರ ಬಿಂಬಗಳಲಿ
ನಮ್ಮೆಲ್ಲಾ ಜೀವನಾಳಗಳಲಿ
ಮೈ ಬೆವರ ಬಿಂದುಗಳಲಿ
ನದಿ ಕೆರೆ ತೊರೆಗಳಲಿ
ಹಳ್ಳ ಕೊಳ್ಳಗಳಲಿ
ಝರಿ ಜಲಪಾತಗಳಲಿ
ನಮ್ಮೆಲ್ಲಾ ಆನಂದ ಭಾಷ್ಪಗಳಲಿ
ನೆಲೆಸು ಬಾ
ಉಳಿಸು ಬಾ
ಬಾಳಿಸು ಬಾ…
ಬಾ ತಾಯಿ, ನೀ ಬಂದೇ ಬಾ,
ನಿನಿಲ್ಲೇ ನೆಲೆಸು ಬಾ
-ಚೇತನ್ ಪಿ
೧೨-೦೪-೨೦೦೫
Mar 31, 2005
ನಾನಿಲ್ಲಿಯವನು
ಹಿಂದೂ ಇಂದೂ ಮುಂದೂ
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ
ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ
ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ
-ಚೇತನ್ ಪಿ.
೩೦-೦೩-೨೦೦೫
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ
ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ
ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ
-ಚೇತನ್ ಪಿ.
೩೦-೦೩-೨೦೦೫
Subscribe to:
Comments (Atom)