Mar 31, 2005

ನಾನಿಲ್ಲಿಯವನು

ಹಿಂದೂ ಇಂದೂ ಮುಂದೂ
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ

ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ

ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ

-ಚೇತನ್ ಪಿ.
೩೦-೦೩-೨೦೦೫

No comments: