Mar 24, 2005

ಮೊನ್ನೆ ಮನೆ ಮುಟ್ಟಿದ್ದು

ಮುಳ್ಳು ಹತ್ತ ದಾಟಿತ್ತು
ಕೆಲಸ ಮಾಡಿ ತಲೆ ಕೆಟ್ಟಿತ್ತು
ಬಸ್ಸಲಿ ಜನಸಂಖ್ಯೆ ನೂರ ಎಂಟಿತ್ತು
ಶೆಖೆ ಇಂದು ಹತ್ತು ಪಟ್ಟಿತ್ತು
ಬೆವರಿ ಬಟ್ಟೆ ಮೈಗಂಟಿತ್ತು
ಕಾಲು ಆಸೀನಕೆ ಆಸೆ ಪಟ್ಟಿತ್ತು
ವಾಕ್-ಮನ್ ಕೈ ಕೊಟ್ಟಿತ್ತು
ದುರ್ಗಂಧಕೆ ಉಸಿರು ಕಟ್ಟಿತ್ತು
ಸಾರಾಯಿಯ ಸ್ಯಾಂಪಲ್ ಮೂಗ ಮುಟ್ಟಿತ್ತು
ಮೆಲ್ಛಾವಣಿ ಆಗಾಗ ತಲೆಯ ತಟ್ಟಿತ್ತು
ಮಬ್ಬುಗತ್ತಲು ಬೀಡು ಬಿಟ್ಟಿತ್ತು
ಯಾರಿಗೆ ಯಾರ ಮೇಲೋ ಸಿಟ್ಟಿತ್ತು
ಎಲ್ಲರ ಹಣೆ ಗಂಟಿಟ್ಟಿತ್ತು
ತಾಳ್ಮೆ ಗಂಟು ಮೂಟೆ ಕಟ್ಟಿತ್ತು
ಅಯ್ಯೋ…… ಶಿವನೇ….
ನನ್ನ ಶ್ರೀನಗರ ಬಂದೇ ಬಿಟ್ಟಿತ್ತು—————

ಚೇತನ್ ಪಿ
೨೩-೦೩-೨೦೦೫

No comments: