May 25, 2005

ಬಿಡುಗಡೆ

ಕಡಲ ಬಿರುಗಾಳಿಗೆ
ಹುಯ್ದಾಡುತಿದೆ ಶ್ವೇತ ನೌಕೆ
- ತೀರವ ತೋರಬಾರದೇ?

ಕುರುಡಾಗಿವೆ ಕಣ್ಣುಗಳು
ಯಕ್ಷ ಪ್ರಶ್ನೆಗಳ ಕೋಲ್ಮಿಂಚಿಗೆ
- ಹೊಸ ದೃಷ್ಠಿಯ ಕರುಣಿಸಬಾರದೇ?

ಕುದಿಯುತಿದೆ ಎದೆ
ಕಲ್ಮಶಗಳ ಕಿಚ್ಚಿನಲಿ
- ಮಳೆಗರೆಯಬಾರದೇ?

ಅದರಲಿ ಅಹಮ್ಮಿನ ಮಹಲು ಕುಸಿದು
ಸ್ವಾರ್ಥ ಅಸೂಯೆಗಳು
- ಕರಗಬಾರದೇ?

ಮರುಳಾಗಿಹೆ ನಾ
ಸುಪ್ತ ಬಂಧನಗಳೊಳಗೆ
-ಬಿಡುಗಡೆಯ ತೋರಬಾರದೇ?

ಮನಸು ಮಣ್ಣಾಗಿ
ಹೊಸ ಹಸಿರು ಅರಳಬಾರದೇ?

-ಚೇತನ
೨೫-೦೫-೨೦೦೫

No comments: