Sep 7, 2009

ಮುನ್ನ

ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು

ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು

ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು


2 comments:

Satish MR said...

ಆಹಾ....ಚೆನ್ನಾಗಿದೆ ಚೇತನ್... ಯಾಕೆ ಬರಿಯೋದು ಕಡಿಮೆ ಮಾಡಿಬಿಟ್ರಿ?

chethan said...

ಧನ್ಯವಾದಗಳು :)