May 18, 2006

ನಿನ್ನೆ ರಾತ್ರಿ

ನಿನ್ನೆ ನೀ ಮುಗಿಲಂಚಿಗೆ ಜಾರಿ
ಮರೆಯಾದ ಮೇಲೆ
ಭುವಿಗೆಲ್ಲ ಬಂಗಾರ ಹೊದಿಸಿ
ಮರೆಯಾದ ಮೇಲೆ
ಹೇ ಉದಯರವಿ,
ಎನಾಯಿತೆಂದು ನಾ ಹೇಳಲೆ?

ಎಂದಿಲ್ಲದ ತಂಗಾಳಿ
ಎಲ್ಲಿಂದಲೋ ಬೀಸಿದಾಗ
ಮೈ ಮನ ಅರಳಿತ್ತು
ಆಗ ನೆಲದಲಿ ಕಾರ್ಮೋಡದ ನೆರಳಿತ್ತು!

ಗುಡುಗಾರ್ಭಟ ಸಿಡಿಲ್ಮಿಂಚು…!
ಆ ವೈಭವವ ಹೇಗೆ ಬಣ್ಣಿಸಲಿ ನಾ…?
ಮಳೆಯ ಸದ್ದು ಕೇಳದಾಗಿತ್ತು!
ನೀನಿಲ್ಲದೆಯೂ ನೋಡು
ಬಾನೆಲ್ಲ ಬೆಳಕಾಗಿತ್ತು!

ರಾತೋರಾತ್ರಿ…
ರಾತೋರಾತ್ರಿ…
ನೀನಿರದ ವೇಳೆ…
ಬೆಂದ ಜೀವಗಳಿಗೆಲ್ಲ
ಮರುಜನ್ಮ ಬಂದಿತ್ತು!

ನೋಡು ಬಾ ಉದಯರವಿ..
ನಿನ್ನದೇ ಹೊಂಗಿರಣಗಳ ಪ್ರತಿಫಲನದಲ್ಲಿ…
ಹೊಸಜೀವ ಕಳೆಯ
ನೋಡು ಬಾ…

-ಚೇತನ್ ಪಿ
೧೭/೦೫/೨೦೦೬

No comments: